Posts

Showing posts with the label Kavana

ಪ್ರೀತಿಯ ತೋರಣ

Image
    ಬೆಳಗಿನ ಬೆಳಕಿನ ನಿಶ್ಯಬ್ದ ಝೇಂಕಾರದಲಿ , ನಿನ್ನ ನೆರಳು ಮೃದುವಾಗಿ ಮರೆಯಾಯಿತು ನನ್ನ ದೃಷ್ಟಿಯಲಿ , ಮೆಲ್ಲನೆ ಹೆಚ್ಚರಿಸುವೆ ನಿನ್ನ ಪ್ರೀತಿಯ ನನ್ನ ಹಾಡಿನಲಿ ,   ಅದು ದೀರ್ಘಕಾಲ ಉಳಿಯುವುದು ನಮ್ಮ ಹೃದಯಗಳಲಿ .   ಸಂಜೆಯ ತಂಗಾಳಿಯ ಒಂದು ಪಿಸುಮಾತಿನಲಿ , ಆತ್ಮವನು ನಿರಾಳವಾಗಿಸುವುದು ನಿನ್ನಯ ನೋಟದಲಿ , ಸಾಮರಸ್ಯದಲ್ಲಿರುವ ಎರಡು ಆತ್ಮಗಳು ಭೇಟಿಯಲಿ , ಕಾಣುವುದು ನಗುವಿನ ಸಿಹಿ ನಮ್ಮ ಮೊಗದಲಿ .   ಪ್ರೀತಿ ಮಳೆಯ ಲಯವಾಗಲಿ , ಶಮನಗೊಳಿಸುವುದು ನಮ್ಮಯ ನೋವನು ಆಳದಲಿ , ಬೇಸಿಗೆಯ ಉಷ್ಣವಿರಲಿ ಅಥವಾ ಚಳಿಗಾಲದ ಶೀತದಲಿ , ನಿನ್ನಯ ಸ್ಪರ್ಶವೆ ಸಾಕಿನ್ನು ನನ್ನ ಕೈಗಳಲಿ .   ಭಾಷೆಯು ಮೌನವಾಗಲಿ , ಕಣ್ಣುಗಳು ಮಾತಾಗಲಿ ಪ್ರೀತಿಯ ಭಾವದಲ್ಲಿ ಹೃದಯಗಳು ಸ್ಪಷ್ಟವಾಗಿರಲಿ ತಾಳ್ಮೆ , ದಯೆ ಮತ್ತು ಅಂತ್ಯವು ನೀನಾಗಿರಲಿ , ನನ್ನಯ ಪ್ರೇಮಿಯ ಕಾಣುವೆ ಸದಾ ಮನದಲಿ .   ನಮ್ಮಯ ಪ್ರೀತಿ ನಿತ್ಯ ಮಿನುಗುವ ನಕ್ಷತ್ರವಾಗಲಿ , ನಮ್ಮ ಜೀವವೇ ನಿಮಗೆ ಸ್ಫೂರ್ತಿಯಾಗಲಿ , ಕಾಣಿಸುವೆವು ನಾವು ನಮ್ಮ ತ್ಯಾಗದ ಬೆಳಕಿನಲಿ , ಸದಾ ಇರುವೆವು ನಾವು ಜೊತೆಯಲಿ , ಜೊತೆ ಜೊತೆಯಲಿ ......!    ಮಂಜುನಾಥ್.   ಎಸ್ ಸಹಾಯಕ ಪ್ರಾಧ್ಯಾಪಕರು , ಮನೋವಿಜ...

ಗಾಂಧೀ ತಾತಾ

Image
    Image Credit : Google.com ಮಕ್ಕಳತಾತಾ ಹರಿಗಿರಿಜನ ಪಿತಾ ಧರೆಯೊಳು ಸಾರಿದ ಭಗವದ್ಗೀತಾ ಉತ್ತಮ ಭಾರತ ಕುಲ ಸಂಭೂತಾ ಸುಜನ ಪೂಜಿತಾ ಗಾಂಧೀ ತಾತಾ ಸ್ವಾತಂತ್ರ್ಯ ಸಾರಿದ ಸ್ಪೂರ್ತಿಯ ತಾತಾ ಎಲ್ಲರ ಮನದಲ್ಲೂ ನೆಲೆಸಿದ ತಾತಾ ಸೆರೆಮನೆ ಹೊಕ್ಕರು ಸಂತೋಷದಾತಾ ಕಳೆದನು ದಿನಗಳ ಗಾಂಧೀ ತಾತಾ ಉಪವಾಸವನು ಆಚರಿಸಿದಾತಾ... ಜಗ್ಗದ ಬ್ರಿಟೀಷರ ಬಗ್ಗಿಸಿದಾತಾ.. ಎಲ್ಲ ಜನಾಂಗವ ಜಯಿಸಿದ ತಾತಾ ತಂದ ಸ್ವತಂತ್ರವ ಗಾಂಧೀ ತಾತಾ ಸತ್ಯ ಅಹಿಂಸೆ ಗಾಂಧೀಯ ತತ್ವಾ ವಿಶ್ವದೆಲ್ಲೆಡೆ ಪ್ರಖ್ಯಾತಿ ಪಡೆದಾತಾ ತಾರಕ ಮಂತ್ರವ ಜಪಿಸುತ ತಾತ ಎಡಗೈಯಲಿ ಚರಕ ಹಿಡಿದು ಕುಂತವ ಬಲಗೈಯಲಿ ಕೋಲು ಹಿಡಿದು ನಿಂತವ ಭರತಖಂಡ ರಾಮರಾಜ್ಯ ಕನಸು ಕಂಡವ ಗಾಂಧಿ ತಾತ ಅಕ್ಟೋಬರ್ 2ರಂದು ಜನಿಸಿದ ಕಂದ ಇಂದು ಆಚರಿಸುವುದು ರಾಷ್ಟ್ರೀಯ ಹಬ್ಬ ಎಂದು ಸತ್ಯ ಮತ್ತು ಹಿಂಸೆಯ ತತ್ವ ಇವರದು ಕಾಲಕಾಲಕ್ಕೆ ಉಪವಾಸ ಸತ್ಯಾಗ್ರಹ ಕೈಗೊಂಡವರು ಕೋಲು ಹಿಡಿದು ಮುಂದೆ ಸಾಗಿದರೆ ಹಿಂಡು ಹಿಂದೆ  ಸಾಗರದಂತೆ ಜನರು ಸರ್ವರಿಗೂ ಸಿಗಲಿ ಸ್ವಾತಂತ್ರ್ಯೆಂದು ಧ್ವನಿ ಎತ್ತಿದ ನಾಯಕ ಗಾಂಧಿ ತಾತ ಭಾರತಾಂಬೆಯ ಕೀರ್ತಿ ಬೆಳಗಿಸಿದ ಶಾಂತಿ ದೂತ ಗೋಡ್ಸೆ ಗುಂಡಿಗೆ ತಾತ ಅಮರನಾದ ಮಹಾತ್ಮ ಅಂದು ಇಂದು ಮುಂದೆಂದಿಗೂ ಆರದೆ ಇರುವ ಜ್ಯೋತಿ ‌ ಸಂಗೀತ ಪಾಟೀಲ್ ✍️ ಪ್ರಥಮ ಬಿ ಎ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಅಪರಿಚಯ

Image
Image credit: alamy.com           ಯಾರೋ ಎಲ್ಲೋ ಸಿಕ್ಕವರಿಗೆ ಅವಶ್ಯಕತೆ ಗೂ ಮೀರಿ sorry, thank you, please ಎಂದಿದ್ದೇನೆ, ಆದರೆ ನಿನ್ನೊಂದಿಗೆ ಏಕೋ ನನ್ನ ಅಹಂಕಾರ ಬಾಯಿ ಕಟ್ಟಿ ಹಾಕುತ್ತದೆ. ಯಾರದೋ ಹಾಡು,ಕವನ, ಸಂದೇಶ, ನೃತ್ಯ, ಛಾಯಾಚಿತ್ರಕ್ಕೆ  ಹೆಬ್ಬೆರಳು ನೋಯುವಷ್ಟು likes ಒತ್ತಿದ್ದೇನೆ, ಅದು ಯಾಕೋ ನಿನ್ನ ಪ್ರತಿಭೆಗೆ ಚಪ್ಪಾಳೆ ತಟ್ಟಲು ಕೈ ಕಟ್ಟಿ ಹಾಕಿದಂತಾಗುತ್ತದೆ. ಯಾರದೋ ಸಾವಿಗೆ ಶೋಕ ಸೂಚಿಸಿ  ನೂರಾರು ಮಾನಸಿಕ ಸ್ವಾಸ್ಥ್ಯದ ಕುರಿತು ಪೋಸ್ಟ್ ಹಾಕಿದ್ದೇನೆ, ಅದು ಯಾಕೋ ಪಕ್ಕದಲ್ಲೇ ಸಾಯುತ್ತಿರುವ  ನಿನ್ನೆಡೆಗೆ ನೋಡಲು ಕಣ್ಣು ಕುರುಡಾಗಿ ಹೋಗುತ್ತದೆ. ಯಾರದೋ ಹತ್ತಿರ ನಿನ್ನ ಬಗ್ಗೆ  ಅದೆಷ್ಟೋ ಚಾಡಿ ಮಾತು ಹೇಳಿದ್ದೇನೆ, ಅದು ಯಾಕೋ ಒಮ್ಮೆಯೂ ನಿನ್ನ ಎದುರು ನಿಂತು  ಹೇಳಲು ಧೈರ್ಯವೇ ಬರಲಿಲ್ಲ. ಯಾರದೋ ಹತ್ತಿರ ಬಿಕ್ಕಿ ಬಿಕ್ಕಿ ಅತ್ತು  ಸಮಾಧಾನ ಹುಡುಕಿದ್ದೇನೆ, ಅದು ಯಾಕೋ ನಿನ್ನ ಪಕ್ಕಕುಳಿತು ಮಾತನಾಡಲು  ನನಗೆ ಸಮಯವೇ ಇಲ್ಲವಾಯಿತು. ಅದೆಷ್ಟೋ ಮೈಲಿ ದೂರದಲ್ಲಿರುವ ಅದು ಯಾರಿಗೂ "How are you?" ಎಂದು ಕೇಳಿದ್ದೇನೆ, ಮೈ ಗೆ ಮೈ ತಾಕುವ ಹತ್ತಿರವಿದ್ದು  ನಿನ್ನ ಕೇಳುವ ಅಗತ್ಯ ಇದೆ ಎಂದು ಅನಿಸಲೇ ಇಲ್ಲ. ಯಾರದೋ ಸಂತೋಷವನ್ನು ನೋಡಿ  ನಂಗೂ ಅದು ಬೇಕು ಎಂದು ಬಯಸಿದ್ದೇನೆ, ಅದು ಯಾಕೋ ಪಕ್ಕದಲ್ಲೇ ಇರುವ ನಿನ್ನ ನೋಡಲು ಮನಸ್ಸು ಒಪ...